ಬೆಂಗಳೂರು : ಕೋವಿಡ್ -19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸೇರಿ ಜನ ಗುಂಪುಗೂಡುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಗುರುವಾರ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಲ್ಲಿ ಮಸೀದಿಯಲ್ಲಿ ಐದು ಬಾರಿ ನಡೆಯುವ ನಮಾಜಿನ ಮೇಲೆ ನಿಷೇಧ ಹೇರಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ .ಪ್ರಮುಖವಾಗಿ ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿ ದರ್ಗಾಗಳಲ್ಲಿ ಐದು ಬಾರಿ ಸಭೆಯ ಪ್ರಾರ್ಥನೆಯನ್ನು ನಡೆಸುತ್ತಾರೆ ಈ ಪ್ರಾರ್ಥನೆ ಮೇಲೆ ಸರ್ಕಾರ ಗುರುವಾರ ನಿಷೇಧ ಹೇರಿದೆ .ಅಲ್ಲದೆ ಏಪ್ರಿಲ್ 23 - ಮೇ 23 ರ ವರೆಗೆ ಮಸೀದಿಯಲ್ಲಿ ಸಿಬ್ಬಂದಿ ಧ್ವನಿವರ್ಧಕಗಳ ಮೂಲಕ ನಮಾಜ್ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ ಸಾರ್ವಜನಿಕರಿಗೆ ಮಸೀದಿಯಲ್ಲಿ ಐದು ಬಾರಿ ಸಭೆ ಗೂಡಿ ಪ್ರಾರ್ಥನೆ ಮಾಡಲು ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ವಕ್ಫ್ ಮತ್ತು ಹಜ್ ಇಲಾಖೆ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
No public shall be allowed to perform five-time congregational prayers in mosques, across Karnataka, during #Ramzan, in view of #COVID19 pandemic. No public address system to be used by the staff of mosques for offering namaz: State Minority Welfare, Waqf & Hajj Department pic.twitter.com/QTEhZ44jYZ
— ANI (@ANI) April 16, 2020
Comments
Post a Comment