ಅಂಬಾನಿ 2 ಕೋಟಿ ರೂಪಾಯಿಯನ್ನು ಸಿನಿಮಾ ರಂಗದ ಕಾರ್ಮಿಕರಿಗೆ ನೀಡಲು ಕಾರಣರಾರು!? ಬಯಲಾಯ್ತು ಅಚ್ಚರಿಯ ವಿಚಾರ!

ಕೊರೊನಾ ನಿಮಿತ್ತ ಸಾಮಾನ್ಯ ಜನರಂತೆ ಸಿನಿಮಾ ರಂಗದ ಕಾರ್ಮಿಕರೂ ಸಹ ಸಂಕಷ್ಟಕ್ಕೆ ಸಿಲುಕಿದ್ದು, ಒಂದೊತ್ತಿನ ಊಟಕ್ಕೆ ಸಹ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ರಂಗದ ಗಣ್ಯರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದರು. ಆದರೆ ಸರಕಾರಕ್ಕೆ ಕೇವಲ ಸಿನಿಮಾ ರಂಗದ ಕಾರ್ಮಿಕರಿಗೆ ಸಹಾಯ ಮಾಡಲು ಸಾಧ್ಯವಿಲ್ಲದೆ ಇರುವುದರಿಂದ ವಿಶೇಷವಾಗಿ ಸಿನಿಮಾ ರಂಗದ ಕಾರ್ಮಿಕ ಬಳಗಕ್ಕೆ ಸಹಾಯ ಮಾಡಲು ಸಾಧ್ಯವಿಗಿರಲಿಲ್ಲ.

ಆ ಕಾರಣದಿಂದ ಸಿನಿಮಾ ರಂಗದ ಗಣ್ಯರು ರಾಜ್ಯದ ಯುವನಾಯಕ ಬಿ.ವೈ ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ವಿಜಯೇಂದ್ರ ಅವರು ರಿಲಯನ್ಸ್ ಸಂಸ್ಥೆಗೆ ಈ ಬಗ್ಗೆ ಮನವಿ ಮಾಡಿದ್ದಕ್ಕೆ ಕೂಡಲೇ ಸ್ಪಂದಿಸಿ ಬರೋಬ್ಬರಿ 2 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಲಿಂಗದೇವರು ಎನ್ನುವವರು ಪತ್ರ ಹಾಗೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಬಹಿರಂಗಪಡಿಸಿದ್ದು, ಅವರು ಅದನ್ನು ಈ ರೀತಿಯಾಗಿ ವಿವರಿಸಿದ್ದಾರೆ.

ಇತ್ತೀಚಿಗೆ ಚಲನಚಿತ್ರರಂಗದ ಕೆಲ ಗಣ್ಯರು ಸೇರಿ, ಸಿನಿಮಾ ಕ್ಷೇತ್ರದ ಕಾರ್ಮಿಕ ವರ್ಗ ಮತ್ತು ಕಷ್ಟದಲ್ಲಿರುವ ಅನೇಕರಿಗೆ ಏನಾದರೂ ಸಹಾಯವಾಗಲಿ ಎಂದು ಮುಖ್ಯ ಮಂತ್ರಿಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಸ್ತಾಪ ಮಾಡಿದ್ದಾರೆ. ತುರ್ತಾಗಿ ಸ್ಪಂದಿಸುವ ಸಲುವಾಗಿ ಹಲವಾರು ಮೀಟಿಂಗ್ ಸಹ ಆಗಿದೆ , ಆದರೆ‌ ಸರ್ಕಾರದ ವ್ಯವಸ್ಥೆಯಲ್ಲಿ ಸಹಾಯ ಮಾಡಲು ಇತಿಮಿತಿಗಳು ಇವೆ ಎನ್ನುವುದನ್ನು ಮನಗೊಂಡ ಗಣ್ಯರು BJP ಯುವ‌ ನಾಯಕಾದ ಶ್ರೀಯುತ ಬಿ ವೈ ವಿಜಯೇಂದ್ರರವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಅವರ ಗಮನಕ್ಕೂ ತಂದಿದ್ದಾರೆ.

ತಕ್ಷಣ ಶ್ರೀಯುತ ಬಿ ವೈ ವಿಜಯೇಂದ್ರರವರು, ರಿಲಯನ್ಸ್ ನವರಲ್ಲಿ ಮನವಿ ಮಾಡಿದ್ದರ ಪರಿಣಾಮ ರಿಲಯನ್ಸ್ ಇಂಡಸ್ಟ್ರೀಸ್ ನವರು ರೇಷನ್ ಮತ್ತು ಇತರೆ ಸಾಮಾನುಗಳನ್ನು ಖರೀದಿಸಲು ಸುಮಾರು 6000 ಕೂಪನ್ ಗಳನ್ನು ಕೊಟ್ಟಿರುತ್ತಾರೆ. 3000/- ರೂ ಮುಖ ಬೆಲೆಯ ಈ ಕೂಪನ್ ಅತ್ಯಂತ ಕಷ್ಟದಲ್ಲಿ ಇರುವವರು ಬಳಸಲು ಅವಕಾಶವಾಗಲಿ.
ಸರ್ಕಾರ ಉಚಿತವಾಗಿ ನಂದಿನಿ ಹಾಲು ವಿತರಣೆ ಮಾಡುವಾಗ ಉಳ್ಳವರೂ ಕೂಡ ಕ್ಯೂನಲ್ಲಿ ನಿಂತು ಪಡೆದಿರುವುದನ್ನ ನಾವು ಮಾಧ್ಯಮಗಳಲ್ಲಿ ನಿತ್ಯ ನೋಡುತ್ತಿದ್ದೇವೆ.

ನನ್ನ ಭಾವನೆಯಲ್ಲಿ ಇದು ಸರ್ಕಾರದ ಕಾರ್ಯಕ್ರಮ ಅಲ್ಲ . ಸರ್ಕಾರ ಬೇರೆಯೇ ರೀತಿಯಲ್ಲಿ ಯೋಚನೆ ಮಾಡಿ ಯೋಜನೆ ರೂಪಿಸುತ್ತದೆ. ಅಲ್ಲಿಯವರೆಗೂ ಸಮಾಧಾನದಿಂದ , ಒಗ್ಗಟ್ಟಿನಿಂದ ಇರಬೇಕಾದ್ದು ನಮ್ಮೆಲ್ಲರ ಕರ್ತವ್ಯ. ನಾನು ಹಿಂದೆಯೂ ಹೇಳಿದ್ದೆ ಕನ್ನಡ ಚಿತ್ರರಂಗವನ್ನು ಮುನ್ನೆಡೆಸುವವರು ಇವತ್ತು ಇಲ್ಲ ಎಂದು. ಡಾ: ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ನಂತರ ನಾವು ಅನಾಥ ರಾಗಿದ್ದೇವೆ‌ ಎಂದರೂ ತಪ್ಪಾಗದು. ನಮ್ಮಲ್ಲಿ ಹಲವಾರು ಸಂಘಟನೆಗಳು ಇದ್ದಾವೆ ಆದರೆ ಒಗ್ಗಟ್ಟು ಕಮ್ಮಿ.

ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಿನಿಮಾ ಕ್ಷೇತ್ರಕ್ಕೆ ಚಲನಚಿತ್ರ ಅಕಾಡೆಮಿ ಸೇತುವೆ ಆಗಿ ಕೆಲಸ ಮಾಡ್ತಾ ಇದೆ. ಸುನಿಲ್ ಪುರಾಣಿಕ್ ತನ್ನ ಸ್ವ ಇಚ್ಛೆಯಿಂದ ಚಿತ್ರರಂಗದ ಹಿರಿಯರಾದ ರಾಕ್ಲೈನ್ ವೆಂಕಟೇಶ್ , ವಾಣಿಜ್ಯ ಮಂಡಳಿ ಅಧ್ಯಕ್ಷ ರಾದ ಜಯರಾಜ್ ಮತ್ತು ತಾರ ಮತ್ತು ಇನ್ನೂ ಮುಂತಾದ ಹಿರಿಯರ ಜೊತೆ ಸಂಪರ್ಕ ಇಟ್ಟುಕೊಂಡು ಮುಂದೆ ಹೋಗ್ತ ಇದ್ದಾರೆ. ನಾವು ಗಮನಿಸಬೇಕಾದ್ದು ಇದು ಅಕಾಡೆಮಿ ಕೆಲಸ ಅಲ್ಲ ಅನ್ನುವುದು. ಇಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಅಕಾಡೆಮಿ ಸರ್ಕಾರದ ಒಂದು ಭಾಗ ಎನ್ನುವುದು ನಾವು ಮರೆಯಬಾರದು.

ಇಂತಹ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ, ಪುನೀತ್ ಮತ್ತು ಉಪೇಂದ್ರ ರವರನ್ನು ಸಹ ನಾನು ಸ್ಮರಿಸುತ್ತಾ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಹೇಳಬಯಸುತ್ತೇನೆ. ವಿಶೇಷವಾಗಿ ರಿಲಯನ್ಸ್ ಇಂಡಸ್ಟ್ರೀಸ್ ನವರಿಗೆ ಧನ್ಯವಾದ.

ಸತ್ಯಾಸತ್ಯತೆಗಳನ್ನು ಬಯಸುವವರು ಸತ್ಯಾನ್ವೇಷಣೆ ಮಾಡಿಕೊಳ್ಳಿ, ಅನಗತ್ಯ ಚರ್ಚೆ ಬೇಡ" ಎಂದು ಬರೆದು ಅಂಬಾನಿಯವರ ಸಹಾಯದ ಹಿಂದಿನ ವಿಚಾರವನ್ನು ಬಯಲು ಮಾಡಿದ್ದಾರೆ.




Comments