ಲಾಕ್‌ಡೌನ್‌ ಸಮಯ ಸದುಪಯೋಗ ಪಡಿಸಲು ನಿತಿನ್ ಗಡ್ಕರಿ ಮಾಸ್ಟರ್ ಪ್ಲ್ಯಾನ್!

ಇದೀಗ ದೇಶದಾದ್ಯಂತ 2.0 ಲಾಕ್‌ಡೌನ್‌ ಆರಂಭವಾಗಿದ್ದು, ಮೊದಲ 21 ದಿನಗಳ ಲಾಕ್‌ಡೌನ್‌ ಬಹುತೇಕ ಯಶಸ್ವಿಯಾಗಿದ್ದು, ಭಾರತದಲ್ಲಿ ಮುಂಬಯಿ ಬಿಟ್ಟು ಸಮೂಹ ಮಟ್ಟದಲ್ಲಿ ಕೊರೊನಾ ಹಬ್ಬುವುದಕ್ಕೆ ತಡೆ ನೀಡಿದೆ. ಮೊದಲನೇ ಹಂತದ ಲಾಕ್‌ಡೌನ್‌ ನ ಮಧ್ಯಭಾಗದಲ್ಲಿ ತಬ್ಲೀಘಿ ಜಮಾತ್ ನ ಕಾರ್ಯಕರ್ತರಿಂದಾಗಿ ದೇಶದಲ್ಲಿ ಕೊರೊನಾ ಹಬ್ಬಿದ್ದು, ಅವರ ಅಸಹಕಾರದಿಂದಾಗಿ ಇಂದು ದೇಶದಲ್ಲಿ ಎರಡನೆಯ ಹಂತದ ಲಾಕ್‌ಡೌನ್‌ ಘೋಷಣೆಯಾಗಿದೆ. ಈ ಲಾಕ್‌ಡೌನ್‌ ಸಮಯವನ್ನು ಭಾರತಿಯರು ವಿಭಿನ್ನವಾಗಿ ತಮ್ಮ ಕುಟುಂಬ ಸದಸ್ಯರೊಂದಿಗೆ ಕಳೆಯುತ್ತಿದ್ದು, ಮನೆಯೊಳಗೆ ಇದ್ದು ಸಮಯ ಕಳೆಯಲು ಬಹುತೇಕರು ಏನಾದರೊಂದು ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇದೀಗ ಈ ಲಾಕ್‌ಡೌನ್‌ ಸಮಯವನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಸ್ಟರ್ ಪ್ಲ್ಯಾನ್ ಒಂದನ್ನು ರೂಪಿಸುತ್ತಿದ್ದು, ಈ ವಿಚಾರ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತ ನಡೆಯುತ್ತಿರುವ ಲಾಕ್‌ಡೌನ್‌ ನಿಂದಾಗಿ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಭಾರತದ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಇತರ ಸೇವಾ ವಲಯಗಳನ್ನು ಹೊರತುಪಡಿಸಿ ಇತರ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲವಾದುದ್ದರಿಂದ ರಸ್ತೆಗಳೆಲ್ಲಾ ಖಾಲಿ ಹೊಡೆಯುತ್ತಿದ್ದು, ಈ ಸಮಯವನ್ನು ಸದುಪಯೋಗ ಪಡಿಸುವ ದೃಷ್ಟಿಯಿಂದ ಹಾಗೂ ದಿನಗೂಲಿ ಕಾರ್ಮಿಕರ ನೆರವಿಗೆ ಧಾವಿಸುವ ದೃಷ್ಟಿಯಿಂದ ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ. ಈ ಲಾಕ್‌ಡೌನ್‌ ಸಮಯವನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸುವ ಯೋಜನೆಯನ್ನು ಪುನಾರರಂಭಿಸಲು ಮುಂದಾಗಿದ್ದಾರೆ. ಖಾಲಿ ಇರುವ ಹೆದ್ದಾರಿಗಳಲ್ಲಿ ಈ ಹಿಂದಿಗಿಂತಲೂ 2 ರಿಂದ 3 ಪಟ್ಟು ವೇಗವಾಗಿ ಕೆಲಸ ಪೂರ್ಣಗೊಳಿಸಿ ರಸ್ತೆಯ ಕೆಲಸವನ್ನು ಪೂರ್ಣಗೊಳಿಸುವುದರ ಜೊತೆಜೊತೆಗೆ ಪ್ರಸ್ತುತ ಕೆಲಸವಿಲ್ಲದೆ ಸಮಸ್ಯೆಯಲ್ಲಿರುವ ದಿನಗೂಲಿ ಕಾರ್ಮಿಕರ ನೆರವಿಗೆ ಧಾವಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿತಿನ್ ಗಡ್ಕರಿ ಮುಂದಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Comments