ಕೋರನ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸದಾ ಒಂದಲ್ಲ ಒಂದು ಆದೇಶ ಹೊರಡಿಸಿ ಸುದ್ದಿಯಲ್ಲಿರುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಅವರು ಈ ಬಾರಿ ಪ್ರಮುಖ ಆದೇಶವೊಂದನ್ನು ಪ್ರಕಟಿಸಿದ್ದಾರೆ .ಜೂನ್ 30 ರವರೆಗೆ ಉತ್ತರ ಪ್ರದೇಶದಲ್ಲಿ ಸಾರ್ವಜನಿಕರು ಗುಂಪುಗೂಡುವುದನ್ನು ನಿಷೇಧಿಸಲಾಗಿದ್ದು ಈ ಆದೇಶವನ್ನು ಧಿಕ್ಕರಿಸುವ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ .ಶುಕ್ರವಾರ ಸಚಿವ ಸಂಪುಟದ ಸಭೆ ನಡೆಸಿದ ಯೋಗಿ ಆದಿತ್ಯನಾಥ ಅವರು ಈ ಆದೇಶವನ್ನು ಹೊರಡಿಸಿದ್ದು , ಉತ್ತರಪ್ರದೇಶದಲ್ಲಿ ಮೇ ೩ ರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು ,ಪರಿಸ್ಥಿತಿಯನ್ನು ನೋಡಿ ಈ ಲಾಕ್ ಡೌನ್ ಅನ್ನು ಸಡಿಲ ಮಾಡಲಾಗುವುದು ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
Chief Minister has directed officers that no public gathering be allowed till 30th June. Further decision will be taken depending on the situation: Office of CM Yogi Adityanath #COVID19 pic.twitter.com/1zF4tw9dLE
— ANI UP (@ANINewsUP) April 25, 2020
Comments
Post a Comment