ಕ್ರಿಕೆಟ್ ದಂತಕತೆ ಎಂದೇ ಖ್ಯಾತರಾದ ಸಚಿ'ನ್ ತೆಂಡೂಲ್ಕರ್ ಕೊರೋನಾ ವಿರುದ್ಧ ಕೈಜೋಡಿಸುವ ಮೂಲಕ ಪ್ರಧಾನ ಮಂತ್ರಿ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಜೊತೆಗೆ 5 ಸಾವಿರ ಬಡವರಿಗೆ ಆಹಾರ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಇದೀಗ ಸಂಕಷ್ಟದಲ್ಲಿರುವ 4 ಸಾವಿರ ಕೂಲಿ ಕಾರ್ಮಿಕರಿಗೆ ಸಚಿನ್ ನೆರವು ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಸಚಿನ್ ಅವರ ಸಹಾಯವನ್ನು ಸ್ಮರಿಸಿರುವ ಹೈಫೈವ್ ಫೌಂಡೇಷನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ‘ಕ್ರೀಡಾ ಸಹಾನುಭೂತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ಧನ್ಯವಾದಗಳು. ನಮ್ಮ ಕೋವಿಡ್-19 ನಿಧಿಗೆ ನೀವು ನೀಡಿದ ನೆರವಿನಿಂದ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ 4 ಸಾವಿರ ಕಾರ್ಮಿಕರಿಗೆ ಆರ್ಥಿಕವಾಗಿ ಸಹಾಯವಾಗಿದೆ‘ ಎಂದು ತಿಳಿಸಿದ್ದಾರೆ.
ಸಚಿನ್ ಅವರ ಸಹಾಯವನ್ನು ಸ್ಮರಿಸಿರುವ ಹೈಫೈವ್ ಫೌಂಡೇಷನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ‘ಕ್ರೀಡಾ ಸಹಾನುಭೂತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ಧನ್ಯವಾದಗಳು. ನಮ್ಮ ಕೋವಿಡ್-19 ನಿಧಿಗೆ ನೀವು ನೀಡಿದ ನೆರವಿನಿಂದ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ 4 ಸಾವಿರ ಕಾರ್ಮಿಕರಿಗೆ ಆರ್ಥಿಕವಾಗಿ ಸಹಾಯವಾಗಿದೆ‘ ಎಂದು ತಿಳಿಸಿದ್ದಾರೆ.
Thanks @sachin_rt for proving once again that #sports encourages compassion! Your generous donation towards our #COVID19 fund enables us to financially aid 4000 underprivileged people, including children from @mybmc schools. Our budding sportspersons thank you, Little Master!😊
— Hi5 Youth Foundation (@hi5youth) May 7, 2020
Comments
Post a Comment