4,000 ದೀನ ದಲಿತ ಬಡವರಿಗೆ ಆರ್ಥಿಕ ಸಹಾಯ ನೀಡಿದ ಕ್ರಿಕೆಟ್ ದೇವರು

ಕ್ರಿಕೆಟ್​ ದಂತಕತೆ ಎಂದೇ ಖ್ಯಾತರಾದ  ಸಚಿ'ನ್​ ತೆಂಡೂಲ್ಕರ್​​ ಕೊರೋನಾ ವಿರುದ್ಧ ಕೈಜೋಡಿಸುವ ಮೂಲಕ ಪ್ರಧಾನ ಮಂತ್ರಿ  ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಜೊತೆಗೆ 5 ಸಾವಿರ ಬಡವರಿಗೆ ಆಹಾರ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಇದೀಗ ಸಂಕಷ್ಟದಲ್ಲಿರುವ 4 ಸಾವಿರ ಕೂಲಿ ಕಾರ್ಮಿಕರಿಗೆ ಸಚಿನ್​ ನೆರವು ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಸಚಿನ್​ ಅವರ ಸಹಾಯವನ್ನು ಸ್ಮರಿಸಿರುವ ಹೈಫೈವ್​ ಫೌಂಡೇಷನ್​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ‘ಕ್ರೀಡಾ ಸಹಾನುಭೂತಿಯನ್ನು ಮತ್ತೊಮ್ಮೆ  ಸಾಬೀತು ಪಡಿಸಿದಕ್ಕಾಗಿ ಸಚಿನ್​ ತೆಂಡೂಲ್ಕರ್​ ಅವರಿಗೆ ಧನ್ಯವಾದಗಳು. ನಮ್ಮ ಕೋವಿಡ್​-19 ನಿಧಿಗೆ ನೀವು ನೀಡಿದ ನೆರವಿನಿಂದ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ 4 ಸಾವಿರ ಕಾರ್ಮಿಕರಿಗೆ  ಆರ್ಥಿಕವಾಗಿ ಸಹಾಯವಾಗಿದೆ‘ ಎಂದು ತಿಳಿಸಿದ್ದಾರೆ. 

Comments