ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆಗೈಯ್ಯುವ ಬೆದರಿಕೆ ಒಡ್ಡಿದ ಕಮ್ರಾನ್ ಅಮೀನ್ ಖಾನ್ ನನ್ನು ಬಂಧಿಸಿದ ಎಟಿಎಸ್

ಉತ್ತರ ಪ್ರದೇಶದ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅವರನ್ನು ಬಾಂಬ್ ಸ್ಫೋಟ ಮಾಡಿ ಕೊಲ್ಲುವುದಾಗಿ ಬೆದರಿಕೆ ಓಡಿದ್ದ 25 ವರ್ಷದ ವ್ಯಕ್ತಿಯನ್ನು  ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.ಬಂಧಿತ ವ್ಯಕ್ತಿಯನ್ನು  ಮುಂಬಯಿ ಪೂರ್ವ ಉಪನಗರದ ಚುನಾಬಟ್ಟಿಯ ಕಮ್ರಾನ್   ಅಮೀನ್ ಖಾನ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಗ್ಗೆ  ಉತ್ತರ ಪ್ರದೇಶ ಪೊಲೀಸರ ಸಾಮಾಜಿಕ ಮಾಧ್ಯಮದ ಹೆಲ್ಪ್ ಡೆಸ್ಕ್ ಗೆ ಕರೆ ಮಾಡಿದ ಆರೋಪಿ ಬಾಂಬ್ ಬ್ಲಾಸ್ಟ್  ಮಾಡಿ ಯೋಗಿ ಆದಿತ್ಯನಾಥ್ ರನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಗೋಮತಿನಗರ ಪೊಲೀಸರು ಕಾಲ್ ಟ್ರೇಸ್ ಮಾಡಿ ಮುಂಬಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದ ಮಹಾರಾಷ್ಟ್ರ ಎಟಿಎಸ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Comments