ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಅವರ ಗಾದಿ ಅಲ್ಲಾಡತ್ತಿರುವಂತೆ, ಭಾರತ-ನೇಪಾಳ ಗಡಿಯಲ್ಲಿ ಅವರ ಆಣತಿಯಂತೆ ಹೊಸದಾಗಿ ನಿರ್ಮಿಸಲಾಗಿದ್ದ ಗಡಿಠಾಣೆಗಳನ್ನು ಬಿಟ್ಟು ನೇಪಾಳ ಸಶಸ್ತ್ರ ಪ್ರಹಾರಿ (ಎನ್ಎಸ್ಪಿ) ಅಥವಾ ನೇಪಾಳ ಸಶಸ್ತ್ರ ಪೊಲೀಸರು ಓಡಿ ಹೋಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಎನ್ಎಸ್ಪಿ ಯೋಧರು ಹೊಸದಾಗಿ ಸ್ಥಾಪಿಸಿರುವ ಗಡಿಠಾಣೆಯತ್ತ ಸುಳಿದಿಲ್ಲ ಎಂದು ಉತ್ತರಾಖಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಪಿ. ಶರ್ಮ ಓಲಿ ಒತ್ತಾಸೆಯ ಮೇರೆಗೆ ಭಾರತೀಯ ಭೂಮಿಯನ್ನು ಸೇರಿಸಿಕೊಂಡು ಎನ್ಎಸ್ಪಿ ಯೋಧರು ಹೊಸದಾಗಿ ಆರು ಗಡಿಠಾಣೆಗಳನ್ನು ನಿರ್ಮಿಸಿದ್ದರು. ಲಿಪುಲೇಖ್ ಪಾಸ್ನಿಂದ ಪಿತ್ತೋರ್ಗಢ ಜಿಲ್ಲೆಯ ಧಾರ್ಚುಲಾ ಪಟ್ಟಣಕ್ಕೆ ಸಂಪರ್ಕಿಸುವ ಹೆದ್ದಾರಿಯನ್ನು ಭಾರತ ಉದ್ಘಾಟಿಸಿದ ನಂತರದಲ್ಲಿ ಈ ಬೆಳವಣಿಗೆ ಕಂಡುಬಂದಿತ್ತು.
ತೀರಾ ಕಡಿದಾದ ಪ್ರದೇಶದಲ್ಲಿ ಗಡಿಠಾಣೆಗಳನ್ನು ನಿರ್ಮಿಸುವುದು ಸುಲಭ. ಆದರೆ ಅವುಗಳ ನಿರ್ವಹಣೆ ಸುಲಭದ ಮಾತಲ್ಲ. ಅಲ್ಲದೆ, ಅವುಗಳ ಸ್ಥಾಪನೆಯಿಂದ ಅವರ ಉದ್ದೇಶವನ್ನು ಈಡೇರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಅವರು ಗಡಿಠಾಣೆಗಳನ್ನು ತೆರವುಗೊಳಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಎನ್ಎಸ್ಪಿ ಯೋಧರು ಹೊಸದಾಗಿ ಸ್ಥಾಪಿಸಿರುವ ಗಡಿಠಾಣೆಯತ್ತ ಸುಳಿದಿಲ್ಲ ಎಂದು ಉತ್ತರಾಖಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಪಿ. ಶರ್ಮ ಓಲಿ ಒತ್ತಾಸೆಯ ಮೇರೆಗೆ ಭಾರತೀಯ ಭೂಮಿಯನ್ನು ಸೇರಿಸಿಕೊಂಡು ಎನ್ಎಸ್ಪಿ ಯೋಧರು ಹೊಸದಾಗಿ ಆರು ಗಡಿಠಾಣೆಗಳನ್ನು ನಿರ್ಮಿಸಿದ್ದರು. ಲಿಪುಲೇಖ್ ಪಾಸ್ನಿಂದ ಪಿತ್ತೋರ್ಗಢ ಜಿಲ್ಲೆಯ ಧಾರ್ಚುಲಾ ಪಟ್ಟಣಕ್ಕೆ ಸಂಪರ್ಕಿಸುವ ಹೆದ್ದಾರಿಯನ್ನು ಭಾರತ ಉದ್ಘಾಟಿಸಿದ ನಂತರದಲ್ಲಿ ಈ ಬೆಳವಣಿಗೆ ಕಂಡುಬಂದಿತ್ತು.
ತೀರಾ ಕಡಿದಾದ ಪ್ರದೇಶದಲ್ಲಿ ಗಡಿಠಾಣೆಗಳನ್ನು ನಿರ್ಮಿಸುವುದು ಸುಲಭ. ಆದರೆ ಅವುಗಳ ನಿರ್ವಹಣೆ ಸುಲಭದ ಮಾತಲ್ಲ. ಅಲ್ಲದೆ, ಅವುಗಳ ಸ್ಥಾಪನೆಯಿಂದ ಅವರ ಉದ್ದೇಶವನ್ನು ಈಡೇರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಅವರು ಗಡಿಠಾಣೆಗಳನ್ನು ತೆರವುಗೊಳಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
Comments
Post a Comment