ಮಹತ್ವದ ಬೆಳವಣಿಗೆಯಲ್ಲಿ ಯು'ದ್ಧ ಪೀ'ಡಿತ ಉಕ್ರೇನ್ ನಲ್ಲಿರುವ ಭಾರತೀಯರ ಸುರಕ್ಷಿತ ವಾಪಸಾತಿಗಾಗಿ ಭಾರತ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ರೊಮೇನಿಯಾ, ಹಂಗೇರಿ ದೇಶಗಳ ಮೂಲಕ ಏರ್ ಲಿಫ್ಟ್ ಕಾರ್ಯಾ'ಚರಣೆಗೆ ನಿರ್ಧರಿಸಿದೆ.
ವಿದೇಶಾಂಗ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸುರ'ಕ್ಷಿತ ವಾಪಸಾತಿಗಾಗಿ ಭಾರತ ಸರ್ಕಾರ ಕೆಲಸ ಮಾಡುತ್ತಿದ್ದು, ಭಾರತ ಸರ್ಕಾರ ಮತ್ತು ಹಂಗೇರಿಯಲ್ಲಿರುವ ಅದರ ರಾಯಭಾರ ಕಚೇರಿಯು ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸುವ ಮಾರ್ಗಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಪ್ರಸ್ತುತ, ಏರ್ ಲಿಫ್ಟ್ ತಂಡಗಳು ಉಜ್ಹೋರೋಡ್ ಬಳಿಯ ಹಂಗೇರಿಯನ್ ಗಡಿಯಲ್ಲಿರುವ ಚಾಪ್-ಝಹೋನಿಯಲ್ಲಿ ಮತ್ತು ಚೆರ್ನಿವ್ಟ್ಸಿ ಬಳಿಯ ರೊಮೇನಿಯನ್ ಗಡಿಯಲ್ಲಿ ಪೊರುಬ್ನೆ-ಸಿರೆಟ್ನಲ್ಲಿ ಕೇಂದ್ರಗಳ ಸ್ಥಾಪನೆ ಮಾಡುತ್ತಿವೆ ಎನ್ನಲಾಗಿದೆ. ಈ ಕುರಿತು ವಿದೇಶಾಂಗ ಇಲಾಖೆ ಸುತ್ತೋಲೆ ಹೊರಡಿಸಿದ್ದು,
ಉಕ್ರೇನ್ ನಲ್ಲಿರುವ ಭಾರತೀಯ ಪ್ರಜೆಗಳು ಧೈ'ರ್ಯದಿಂದಿರಲು ಮನವಿ ಮಾಡಿದೆ ಭಾರತಕ್ಕೆ ಸ್ಥಳಾಂತರ ಮಾಡಲು ಬೇಕಾಗಿರುವ ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತಿದ್ದು ಈಗಾಗಲೇ ಇದರ ಮೊದಲ ವಿದ್ಯಾರ್ಥಿಗಳ ಬ್ಯಾಚ್ ಉಕ್ರೇನ್ ನಿಂದ ಹೊರಟಿದ್ದು ಈ ಮಧ್ಯೆ ಹೊರಡೋ ವಿಮಾನಕ್ಕೆ ತ್ರಿವರ್ಣ ಧ್ವಜವೇ ಪ್ರಮುಖ ಗುರುತಾಗಿ ಗುರುತಿಸಿಕೊಂಡಿದೆ .
ಯಾರೇ ಆಗಲಿ ಮುಖ್ಯವಾಗಿ ವಾಹನಗಳಲ್ಲಿ ಪ್ರಯಾಣ ಮಾಡುವ ವೇಳೆ ಭಾರತದ ಧ್ವಜವನ್ನು ಪ್ರಿಂಟ್ ತೆಗೆದು ವಾಹನದ ಮುಂಭಾಗ ಹಾಗೂ ಬಸ್ಸಿಗೆ ಅಂಟಿಸುವುದು ಕಡ್ಡಾಯ ಎಂದು ವಿದೇಶಾಂಗ ಇಲಾಖೆ ಸೂಚನೆ ನೀಡಿದೆ .ಈಗ ಭಾರತಕ್ಕೆ ಹೊರಡುವ ಎಲ್ಲಾ ವಾಹನಗಳ ಮೇಲೆ ತ್ರಿವರ್ಣ ಧ್ವಜವನ್ನು ಹೈಲೈಟ್ ಮಾಡಿ ಅಂಟಿಸಲಾಗಿದೆ .ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ತಿಳಿಸಲಾಗಿದ್ದು ಅಗತ್ಯಬಿದ್ದರೆ ಸಹಾಯವಾಣಿ ಗೆ ಕರೆ ಮಾಡುವಂತೆ ಸೂಚನೆ ನೀಡಲಾಗಿದೆ
.ಭಾರತ ಮತ್ತು ರಷ್ಯಾ ನಡುವಿನ ಉತ್ತಮ ಸಂಬಂಧದ ಕಾರಣ ಭಾರತೀಯ ಪ್ರಯಾಣಿಕರು ಯಾವುದೇ ಆತಂ'ಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಉಕ್ರೇನ್ ನಿಂದ ಭಾರತಕ್ಕೆ ವಾಪಸಾಗುವ ಭಾರತೀಯರ ಪ್ರಯಾಣದ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುವುದಾಗಿ ಹೇಳಿದ್ದು, ಈ ಕುರಿತು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
Comments
Post a Comment