ಕಾರ್ಕಳ ಪಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ : ತಲೆಮರೆಸಿಕೊಂಡ ಸುಜಿತ್ ಪೂಜಾರಿ ಮತ್ತು ಅಭಿನಂದನ್ ಶೆಟ್ಟಿ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ ಪಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ .ಈ ಸಂಬಂಧ ಸೆಪ್ಟೆಂಬರ್ 24ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಅಪ್ರಾಪ್ತೆಯ ಮೇಲೆ ನಿಂಜೂರು ಗ್ರಾಮದ ಬೋಪಾಡಿ ಸಮೀಪ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ದೂರು ನೀಡಲಾಗಿದೆ. ಪ್ರಕರಣದಲ್ಲಿ ಸುಜಿತ್ ಪೂಜಾರಿ ಮತ್ತು ಅಭಿನಂದನ್ ಶೆಟ್ಟಿ ಆರೋಪಿಗಳಾಗಿದ್ದಾರೆ.
ಆರೋಪಿಗಳ ವಿರುದ್ಧ ಕಲಂ 354 (D ) 506 ,R/W , 34 IPC , ಮತ್ತು ಕಲಂ 3 (2 ) (ವಿ-ಎ) SC - ST (POA ) ಆಕ್ಟ್ ೨೦೧೫ ಮತ್ತು ೧೧,೧೨ ,೧೭ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳು ಸದ್ಯ ತಲೆಮೆರೆಸಿಕೊಂಡಿದ್ದು . ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ .ಇನ್ನು ಆರೋಪಿಗಳು ಪ್ರಮುಖ ರಾಜಕೀಯ ಪಕ್ಷದ ಕಾರ್ಯಕರ್ತರು ಎಂದು ಕೂಡ ತಿಳಿದು ಬಂದಿದೆ. .
Comments
Post a Comment